ಮಾಧ್ಯಮ ಮತ್ತು ಯುವಜನತೆ ವಿಶೇಷ ಉಪನ್ಯಾಸ

ಮೂಡುಬಿದಿರೆ: ವರದಿ, ಲೇಖನ ಮೊದಲಾದ ರೂಪಗಳಿಗೆ ಸೀಮಿತವಾಗಿದ್ದ ಮಾಧ್ಯಮ ಇಂದು ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಸಾಮಾಜಿಕ ಜಾಲತಾಣಗಳು ಮಹತ್ವ ಪಡೆಯುತ್ತಿವೆ. ಮಾಧ್ಯಮಗಳು ಕೂಡ ಉದ್ಯಮವಾಗಿ ಬದಲಾಗುತ್ತಿದೆ. ಅನೇಕ ಋಣಾತ್ಮಕ ಸಂಗತಿಗಳು ಮಾಧ್ಯಮಲೋಕವನ್ನು ಇಂದು ಆವರಿಸಿದರೂ ಮಾಧ್ಯಮದ ವಿಶ್ವಸಾರ್ಹತೆ ಇಂದಿಗೂ ಉಳಿದಿದೆ ಎಂದು ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀನಿವಾಸ ಹೊಡೆಯಾಳ ಅಭಿಪ್ರಾಯಪಟ್ಟರು.
ಅವರು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ `ಮಾಧ್ಯಮ ಮತ್ತು ಯುವಜನತೆ’ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳು ಅಪಾಯಕಾರಿ ಪರಿಣಾಮಗಳನ್ನು ವಿಶ್ಲೇಷಿಸಿದರು.
ಪೆÇ್ರ.ಹರೀಶ್ ಟಿ.ಜಿ, ಡಾ.ಯೋಗೀಶ ಕೈರೋಡಿ ಉಪಸ್ಥಿತರಿದ್ದರು.
ಡಾ.ಕೃಷ್ಣರಾಜ ಕರಬ ಸ್ವಾಗತಿಸಿದರು. ಡಾ.ಪ್ರವೀಣ್‍ಚಂದ್ರ ವಂದಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.